ಶ್ರೀನಿಧಿಯ ಇ-ಪುಸ್ತಕ ಪ್ರಪಂಚ

11:55 AM

ಕನ್ನಡದಲ್ಲಿ ಹೆಚ್ಚು ಹೆಚ್ಚು ಇ-ಪುಸ್ತಕಗಳು ಬರಬೇಕು ಎಂದು ಬಹಳ ಹಿಂದಿನಿಂದಲೂ ಹೇಳುತ್ತ ಬಂದಿರುವವರು ಶ್ರೀ ಬೇದ್ರೆ ಮಂಜುನಾಥ. ಅವರ ಅನೇಕ ಪುಸ್ತಕಗಳು, ಬರಹಗಳು ಈಗಾಗಲೇ ಇ-ಪುಸ್ತಕಗಳ ರೂಪದಲ್ಲಿ ಲಭ್ಯವಿವೆ. ಅವರ ಪ್ರೇರಣೆಯಿಂದ ಈಗ ನಾನೂ ಇ-ಪುಸ್ತಕಗಳನ್ನು ಪ್ರಕಟಿಸಲು ಪ್ರಾರಂಭಿಸಿದ್ದೇನೆ, ಶ್ರೀನಿಧಿಯ ಪ್ರಪಂಚದ ಅಂಗವಾಗಿ ಇದೀಗ  ಶ್ರೀನಿಧಿಯ ಇ-ಪುಸ್ತಕ ಪ್ರಪಂಚ ಶುರುವಾಗಿದೆ.

ಇಲ್ಲಿ ಮೊದಲನೆಯದಾಗಿ ಕಾಣಿಸಿಕೊಂಡಿರುವುದು 'ಸ್ವಾತಂತ್ರ್ಯದ ಕಿಡಿ ಸಂಗೊಳ್ಳಿ ರಾಯಣ್ಣ' - ಅಪ್ರತಿಮ ವೀರನ ಬದುಕನ್ನು ಪರಿಣಾಮಕಾರಿಯಾಗಿ ನಿರೂಪಿಸಿರುವ ಚಾಮರಾಜ ಸವಡಿಯವರ ಕೃತಿ.

ಶ್ರೀನಿಧಿಯ ಇ-ಪುಸ್ತಕ ಪ್ರಪಂಚಕ್ಕೆ ಭೇಟಿಕೊಡಲು ಇಲ್ಲಿ ಕ್ಲಿಕ್ ಮಾಡಿ. ನಿಮ್ಮ ಅನಿಸಿಕೆ-ಅಭಿಪ್ರಾಯಗಳಿಗೆ ಸ್ವಾಗತ.

You Might Also Like

0 Responses

Popular Posts

Like us on Facebook