ಮೈಸೂರು ಸಂಸ್ಥಾನದ ಹೆಸರಾಂತ ಅರಸರಲ್ಲೊಬ್ಬರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲಕ್ಕೆ ಸಂಬಂಧಿಸಿದ ಐತಿಹಾಸಿಕ ಕಾದಂಬರಿ 'ಶ್ರೀಕೃಷ್ಣ ಭೂಪಾಲ'. ಮಾ. ನಾ. ಚೌಡಪ್ಪ ಎಂಬ ಮಹನೀಯರು ಬರೆದ ಈ ಕೃತಿ ೧೯೫೮ರಲ್ಲಿ ಪ್ರಕಟವಾಗಿತ್ತು. ಈ ಕಾದಂಬರಿಯಲ್ಲಿ ಕರೂರು ಶ್ರೀನಿವಾಸಾಚಾರ್ಯರೆಂಬ ವಿದ್ವಾಂಸರ ಪ್ರಸ್ತಾಪ ಬರುತ್ತದೆ.
ಖಾಸಾ ಚಾಮರಾಜ ಒಡೆಯರ ನಿಧನಾನಂತರ ಯದುವಂಶದ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡು ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಅಧಿಕಾರ ಮರಳಿಸಿಗಲು ಪ್ರಮುಖ ಕಾರಣರಾಗಿದ್ದವರು ರಾಜಮಾತೆ ವಾಣೀವಿಲಾಸ ಸನ್ನಿಧಾನ. ರಾಜಮಾತೆಯವರ ಪ್ರಯತ್ನದಲ್ಲಿ ಜೊತೆಯಾಗಿದ್ದು ಪ್ರಧಾನಿಯಾಗಿ ಅವರ ಬೆಂಬಲಕ್ಕೆ ನಿಂತವರು ತಿರುಮಲರಾಯರು. ಕರೂರಿನ ಆಡಳಿತ ತಿರುಮಲರಾಯರ ಮೇಲ್ವಿಚಾರಣೆಯಲ್ಲಿದ್ದಾಗ ಶ್ರೀನಿವಾಸಾಚಾರ್ಯರು ಅವರ ಮನೆಯಲ್ಲಿ ದೇವತಾರ್ಚನೆ ಮಾಡುತ್ತಿದ್ದರಂತೆ. ನಂತರದ ದಿನಗಳಲ್ಲಿ ಶ್ರೀರಂಗಪಟ್ಟಣಕ್ಕೆ ಬಂದ ಶ್ರೀನಿವಾಸಾಚಾರ್ಯರು ಟಿಪ್ಪುವಿನ ಸಮೀಪದಲ್ಲಿದ್ದುಕೊಂಡೇ ಮೈಸೂರು ರಾಜಮನೆತನದ ಹಿತರಕ್ಷಣೆಗಾಗಿ ಶ್ರಮಿಸಿದರು ಎಂದು 'ಶ್ರೀಕೃಷ್ಣ ಭೂಪಾಲ' ಕಾದಂಬರಿ ಹೇಳುತ್ತದೆ.
ನಂತರದ ದಿನಗಳಲ್ಲಿ ಮೈಸೂರು ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ ಆಳ್ವಿಕೆಗೆ ಒಳಪಟ್ಟಮೇಲೆ ಕರೂರು ಶ್ರೀನಿವಾಸಾಚಾರ್ಯರು ಅರಸರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದರು. ರಘುನಾಥಾಚಾರ್ಯರೆಂಬುವವರು ಇವರ ತಮ್ಮನ ಮಗ. ರಘುನಾಥಾಚಾರ್ಯರ ಪುತ್ರ ಚಿಕ್ಕ ಕರೂರು ಶ್ರೀನಿವಾಸಾಚಾರ್ಯ ಅಥವಾ 'ಸುಂದರ ಸುದರ್ಶನಾಚಾರ್ಯ'ರು ಕೂಡ ಮೈಸೂರು ಅರಸರ ಸೇವೆಯಲ್ಲಿದ್ದವರೇ.
ರಘುನಾಥಾಚಾರ್ಯರ ಇನ್ನೊಬ್ಬ ಮಗ ತಿರುಮಲಾಚಾರ್ಯರ ಪುತ್ರರೇ ಶ್ರೀನಿವಾಸರಂಗಾಚಾರ್ಯರು. ಮೈಸೂರು ಟ್ರೇನಿಂಗ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಶ್ರೀನಿವಾಸರಂಗಾಚಾರ್ಯರು 'ಮೈಸೂರ ಮೈಸಿರಿ', 'ಕರ್ಣಾಟಕ ಮೂಲಾದರ್ಶ ಅಥವಾ ಕನ್ನಡದ ಕನ್ನಡಿ' ಮುಂತಾದ ಚರಿತ್ರಾರ್ಹ ಕೃತಿಗಳನ್ನು ರಚಿಸಿದ್ದರು. ಒಡೆಯರ ಕಾಲದ ಮೈಸೂರಿನ ಚಿತ್ರಣವನ್ನು 'ಮೈಸೂರ ಮೈಸಿರಿ' ಕಟ್ಟಿಕೊಡುತ್ತದೆ. ಇನ್ನು ಕರ್ಣಾಟಕ ಮೂಲಾದರ್ಶ, ಕನ್ನಡವು ಸಂಸ್ಕೃತಜನ್ಯ ಭಾಷೆ ಎಂಬ ವಾದವನ್ನು ಮುಂದಿಡುವ ಕೃತಿ.
ಶ್ರೀನಿವಾಸರಂಗಾಚಾರ್ಯರ ಪುತ್ರರೇ ಪಂಡಿತ ತಿರು ಶ್ರೀನಿವಾಸಾಚಾರ್ಯರು. ಹೊಸಗನ್ನಡ ವ್ಯಾಕರಣದ ಆದ್ಯ ಗ್ರಂಥಕರ್ತರಲ್ಲೊಬ್ಬರಾಗಿದ್ದ ತಿರುಶ್ರೀಯವರು ಪ್ರೌಢಶಾಲಾ ಕನ್ನಡ ವ್ಯಾಕರಣ, ಸಂಸ್ಕೃತಿ ಪ್ರದೀಪ ಮುಂತಾದ ಕೃತಿಗಳನ್ನು ರಚಿಸಿದ್ದರು. ಮಧುಗಿರಿ, ಹಾಸನ, ಆಯನೂರು, ಮೈಸೂರು ಮುಂತಾದೆಡೆಗಳಲ್ಲಿ ಪ್ರೌಢಶಾಲಾ ಕನ್ನಡ ಪಂಡಿತರಾಗಿ ಕೆಲಸಮಾಡಿದ್ದ ತಿರು ಶ್ರೀನಿವಾಸಾಚಾರ್ಯರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟರಾಗಿದ್ದರು. ೧೯೫೬ರಿಂದ ೫೯ರ ನಡುವೆ ಹಾಸನದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಅವರ ವಿದ್ಯಾರ್ಥಿಯಾಗಿದ್ದ ಮೈ. ಶ್ರೀ. ನಟರಾಜರು ತಿರುಶ್ರೀಯವರ ವ್ಯಾಕರಣ ಪಾಠ ಕೇಳಲು ವಿಶೇಷ ತರಗತಿಗಳಿಗೆ ಹೋಗುತ್ತಿದ್ದದ್ದು ಹಾಗೂ ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಲು ಅವರೊಡನೆ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದದ್ದನ್ನು ಆಪ್ತವಾಗಿ ನೆನಪಿಸಿಕೊಳ್ಳುತ್ತಾರೆ. ಚರ್ಚಾಸ್ಪರ್ಧೆಗಳಿಗೆ ತಯಾರಿ ಮಾಡುವಾಗ ಹಾಗೂ ಆ ಸಂಬಂಧದಲ್ಲಿ ಪ್ರಯಾಣಮಾಡುವಾಗ ಅವರು ಶ್ರೀನಿವಾಸಾಚಾರ್ಯರೊಡನೆ ಸಾಕಷ್ಟು ರಸಘಳಿಗೆಗಳನ್ನು ಕಳೆದಿದ್ದರಂತೆ.
ಪಂಡಿತ ತಿರು ಶ್ರೀನಿವಾಸಾಚಾರ್ಯರು ಹಾಗೂ ಅವರ ಹಿರಿಯರ ಬಗ್ಗೆ, ಅವರ ಕೃತಿಗಳ ಬಗ್ಗೆ ಯಾವುದಾದರೂ ಮಾಹಿತಿ, ಅವರ ಒಡನಾಟದ ನೆನಪು ಅಥವಾ ಅವರ ಯಾವುದೇ ಕೃತಿಯ ಪ್ರತಿ ನಿಮ್ಮಲ್ಲಿದ್ದರೆ ದಯಮಾಡಿ ನಮ್ಮೊಡನೆ ಹಂಚಿಕೊಳ್ಳಬೇಕೆಂಬುದು ಅವರ ಕುಟುಂಬದವರೆಲ್ಲರ ಕೋರಿಕೆ.
ಖಾಸಾ ಚಾಮರಾಜ ಒಡೆಯರ ನಿಧನಾನಂತರ ಯದುವಂಶದ ರಕ್ಷಣೆಯ ಜವಾಬ್ದಾರಿ ವಹಿಸಿಕೊಂಡು ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಅಧಿಕಾರ ಮರಳಿಸಿಗಲು ಪ್ರಮುಖ ಕಾರಣರಾಗಿದ್ದವರು ರಾಜಮಾತೆ ವಾಣೀವಿಲಾಸ ಸನ್ನಿಧಾನ. ರಾಜಮಾತೆಯವರ ಪ್ರಯತ್ನದಲ್ಲಿ ಜೊತೆಯಾಗಿದ್ದು ಪ್ರಧಾನಿಯಾಗಿ ಅವರ ಬೆಂಬಲಕ್ಕೆ ನಿಂತವರು ತಿರುಮಲರಾಯರು. ಕರೂರಿನ ಆಡಳಿತ ತಿರುಮಲರಾಯರ ಮೇಲ್ವಿಚಾರಣೆಯಲ್ಲಿದ್ದಾಗ ಶ್ರೀನಿವಾಸಾಚಾರ್ಯರು ಅವರ ಮನೆಯಲ್ಲಿ ದೇವತಾರ್ಚನೆ ಮಾಡುತ್ತಿದ್ದರಂತೆ. ನಂತರದ ದಿನಗಳಲ್ಲಿ ಶ್ರೀರಂಗಪಟ್ಟಣಕ್ಕೆ ಬಂದ ಶ್ರೀನಿವಾಸಾಚಾರ್ಯರು ಟಿಪ್ಪುವಿನ ಸಮೀಪದಲ್ಲಿದ್ದುಕೊಂಡೇ ಮೈಸೂರು ರಾಜಮನೆತನದ ಹಿತರಕ್ಷಣೆಗಾಗಿ ಶ್ರಮಿಸಿದರು ಎಂದು 'ಶ್ರೀಕೃಷ್ಣ ಭೂಪಾಲ' ಕಾದಂಬರಿ ಹೇಳುತ್ತದೆ.
ನಂತರದ ದಿನಗಳಲ್ಲಿ ಮೈಸೂರು ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ ಆಳ್ವಿಕೆಗೆ ಒಳಪಟ್ಟಮೇಲೆ ಕರೂರು ಶ್ರೀನಿವಾಸಾಚಾರ್ಯರು ಅರಸರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದರು. ರಘುನಾಥಾಚಾರ್ಯರೆಂಬುವವರು ಇವರ ತಮ್ಮನ ಮಗ. ರಘುನಾಥಾಚಾರ್ಯರ ಪುತ್ರ ಚಿಕ್ಕ ಕರೂರು ಶ್ರೀನಿವಾಸಾಚಾರ್ಯ ಅಥವಾ 'ಸುಂದರ ಸುದರ್ಶನಾಚಾರ್ಯ'ರು ಕೂಡ ಮೈಸೂರು ಅರಸರ ಸೇವೆಯಲ್ಲಿದ್ದವರೇ.
ರಘುನಾಥಾಚಾರ್ಯರ ಇನ್ನೊಬ್ಬ ಮಗ ತಿರುಮಲಾಚಾರ್ಯರ ಪುತ್ರರೇ ಶ್ರೀನಿವಾಸರಂಗಾಚಾರ್ಯರು. ಮೈಸೂರು ಟ್ರೇನಿಂಗ್ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಶ್ರೀನಿವಾಸರಂಗಾಚಾರ್ಯರು 'ಮೈಸೂರ ಮೈಸಿರಿ', 'ಕರ್ಣಾಟಕ ಮೂಲಾದರ್ಶ ಅಥವಾ ಕನ್ನಡದ ಕನ್ನಡಿ' ಮುಂತಾದ ಚರಿತ್ರಾರ್ಹ ಕೃತಿಗಳನ್ನು ರಚಿಸಿದ್ದರು. ಒಡೆಯರ ಕಾಲದ ಮೈಸೂರಿನ ಚಿತ್ರಣವನ್ನು 'ಮೈಸೂರ ಮೈಸಿರಿ' ಕಟ್ಟಿಕೊಡುತ್ತದೆ. ಇನ್ನು ಕರ್ಣಾಟಕ ಮೂಲಾದರ್ಶ, ಕನ್ನಡವು ಸಂಸ್ಕೃತಜನ್ಯ ಭಾಷೆ ಎಂಬ ವಾದವನ್ನು ಮುಂದಿಡುವ ಕೃತಿ.
ಶ್ರೀನಿವಾಸರಂಗಾಚಾರ್ಯರ ಪುತ್ರರೇ ಪಂಡಿತ ತಿರು ಶ್ರೀನಿವಾಸಾಚಾರ್ಯರು. ಹೊಸಗನ್ನಡ ವ್ಯಾಕರಣದ ಆದ್ಯ ಗ್ರಂಥಕರ್ತರಲ್ಲೊಬ್ಬರಾಗಿದ್ದ ತಿರುಶ್ರೀಯವರು ಪ್ರೌಢಶಾಲಾ ಕನ್ನಡ ವ್ಯಾಕರಣ, ಸಂಸ್ಕೃತಿ ಪ್ರದೀಪ ಮುಂತಾದ ಕೃತಿಗಳನ್ನು ರಚಿಸಿದ್ದರು. ಮಧುಗಿರಿ, ಹಾಸನ, ಆಯನೂರು, ಮೈಸೂರು ಮುಂತಾದೆಡೆಗಳಲ್ಲಿ ಪ್ರೌಢಶಾಲಾ ಕನ್ನಡ ಪಂಡಿತರಾಗಿ ಕೆಲಸಮಾಡಿದ್ದ ತಿರು ಶ್ರೀನಿವಾಸಾಚಾರ್ಯರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟರಾಗಿದ್ದರು. ೧೯೫೬ರಿಂದ ೫೯ರ ನಡುವೆ ಹಾಸನದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಅವರ ವಿದ್ಯಾರ್ಥಿಯಾಗಿದ್ದ ಮೈ. ಶ್ರೀ. ನಟರಾಜರು ತಿರುಶ್ರೀಯವರ ವ್ಯಾಕರಣ ಪಾಠ ಕೇಳಲು ವಿಶೇಷ ತರಗತಿಗಳಿಗೆ ಹೋಗುತ್ತಿದ್ದದ್ದು ಹಾಗೂ ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಲು ಅವರೊಡನೆ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದದ್ದನ್ನು ಆಪ್ತವಾಗಿ ನೆನಪಿಸಿಕೊಳ್ಳುತ್ತಾರೆ. ಚರ್ಚಾಸ್ಪರ್ಧೆಗಳಿಗೆ ತಯಾರಿ ಮಾಡುವಾಗ ಹಾಗೂ ಆ ಸಂಬಂಧದಲ್ಲಿ ಪ್ರಯಾಣಮಾಡುವಾಗ ಅವರು ಶ್ರೀನಿವಾಸಾಚಾರ್ಯರೊಡನೆ ಸಾಕಷ್ಟು ರಸಘಳಿಗೆಗಳನ್ನು ಕಳೆದಿದ್ದರಂತೆ.
ಪಂಡಿತ ತಿರು ಶ್ರೀನಿವಾಸಾಚಾರ್ಯರು ಹಾಗೂ ಅವರ ಹಿರಿಯರ ಬಗ್ಗೆ, ಅವರ ಕೃತಿಗಳ ಬಗ್ಗೆ ಯಾವುದಾದರೂ ಮಾಹಿತಿ, ಅವರ ಒಡನಾಟದ ನೆನಪು ಅಥವಾ ಅವರ ಯಾವುದೇ ಕೃತಿಯ ಪ್ರತಿ ನಿಮ್ಮಲ್ಲಿದ್ದರೆ ದಯಮಾಡಿ ನಮ್ಮೊಡನೆ ಹಂಚಿಕೊಳ್ಳಬೇಕೆಂಬುದು ಅವರ ಕುಟುಂಬದವರೆಲ್ಲರ ಕೋರಿಕೆ.
ನವೆಂಬರ್ ೨೩, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ. ಈ ಲೇಖನದ ಪಠ್ಯರೂಪಕ್ಕಾಗಿ ಇ-ಜ್ಞಾನ ನೋಡಿ.
ಮಾತಾಡುವ ಚಿತ್ರಗಳ ಈ ಕಂತಿನ ಜೊತೆಗೆ ಪುಟ್ಟದೊಂದು ಪ್ರವಾಸ ಕಥನವೂ ಇದೆ!
ಸಂಸ್ಕೃತಿ ಸಂಪನ್ನ ಮನುಷ್ಯನಾಗಿ ಹುಟ್ಟಿದರೆ ಬನವಾಸಿ ದೇಶದಲ್ಲೇ ಹುಟ್ಟಬೇಕು; ಒಂದು ವೇಳೆ ಆಗದಿದ್ದರೆ ಅಲ್ಲಿ ಕೊನೆಯ ಪಕ್ಷ ಕೋಗಿಲೆಯಾಗಿಯಾದರೂ ಮರಿ ದುಂಬಿಯಾಗಿಯಾದರೂ ಹುಟ್ಟಬೇಕು ಎಂದಿದ್ದ ಪಂಪ ಮಹಾಕವಿ.
ಆತ ಹೀಗೆ ಹೇಳುವಂತೆ ಮಾಡಿದ ಬನವಾಸಿಯನ್ನು ಒಮ್ಮೆಯಾದರೂ ನೋಡಲೇಬೇಕು ಅಂದುಕೊಂಡು ಬಹಳ ವರ್ಷಗಳೇ ಆಗಿದ್ದರೂ ಅಲ್ಲಿಗೆ ಹೋಗಿಬರಲು ಅದೇಕೋ ಕಾಲವೇ ಕೂಡಿಬಂದಿರಲಿಲ್ಲ.
ಅಂತೂ ಇಂತೂ ಕಳೆದ ವಾರಾಂತ್ಯದಲ್ಲಿ ಬನವಾಸಿಗೆ ಹೋಗಿಬರೋಣ ಎಂದು ಹೊರಟಿದ್ದಾಯಿತು. ಅಲ್ಲಿನ ವಿಶ್ವೋದಯ ಗ್ರಾಮೀಣ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ ನಡೆಸುವ ವನವಾಸಿಕ ಟೂರಿಸ್ಟ್ ಹೋಮ್ ಸಂಪರ್ಕಿಸಿ ರೂಮುಗಳನ್ನೂ ಕಾದಿರಿಸಿಕೊಂಡೆವು. ಅಡ್ವಾನ್ಸ್ ಏನೂ ಬೇಡ ಬಿಡಿ ಎಂದ ಅಲ್ಲಿನ ವ್ಯವಸ್ಥಾಪಕ ಶ್ರೀ ಬ್ರಹ್ಮಕುಮಾರ್, ನಮ್ಮೊಡನೆ ಸಂಪರ್ಕದಲ್ಲಿದ್ದು ಪ್ರವಾಸದ ತಯಾರಿಗೆ ಸಾಕಷ್ಟು ನೆರವು ನೀಡಿದರು.
ಶನಿವಾರ ಬೆಳಗಿನ ಜಾವ ಒಂದು ಗಂಟೆ ವೇಳೆಗೆ ಬೆಂಗಳೂರಿಂದ ಹೊರಟು ಚಿತ್ರದುರ್ಗ-ಹಾವೇರಿ ಮಾರ್ಗವಾಗಿ ಬನವಾಸಿ ತಲುಪಿದಾಗ ಏಳು ಗಂಟೆ. ತಣ್ಣನೆ ವಾತಾವರಣ, ಎಲ್ಲೆಲ್ಲೂ ಹಸಿರು. ಇತ್ತೀಚೆಗಷ್ಟೆ ಸುರಿದ ಧಾರಾಕಾರ ಮಳೆಯಿಂದ ಕೆರೆಗಳೆಲ್ಲ ಭರ್ತಿಯಾಗಿದ್ದವು; ವರದಾ ನದಿಯಲ್ಲೂ ತುಂಬ ನೀರಿತ್ತು.
ಸ್ನಾನ -ತಿಂಡಿ ಮುಗಿಸಿ ನಾವು ಹೋದದ್ದು ಮಧುಕೇಶ್ವರ ದೇವಸ್ಥಾನಕ್ಕೆ. ಕನ್ನಡನಾಡಿನ ಮೊದಲ ರಾಜಧಾನಿಯ ಆರಾಧ್ಯ ದೈವ ಮಧುಕೇಶ್ವರ. ಈ ದೇವಸ್ಥಾನದ ನಿರ್ಮಾಣವಾದದ್ದು ಕದಂಬರ ಕಾಲದಲ್ಲಿ. ಸುಂದರ ಕೆತ್ತನೆಗಳಿರುವ ಈ ದೇವಸ್ಥಾನದಲ್ಲಿ ಅನೇಕ ವಿಶೇಷ ಆಕರ್ಷಣೆಗಳೂ ಇವೆ - ಒಂದು ಕಣ್ಣಿನಿಂದ ಈಶ್ವರನನ್ನು ಇನ್ನೊಂದು ಕಣ್ಣಿನಿಂದ ಪಾರ್ವತಿಯನ್ನು ನೋಡುವ ಬಸವಣ್ಣ, ಕಲ್ಲಿನ ಮಂಚ, ಅರ್ಧ ಗಣೇಶ ಹೀಗೆ.
ಬನವಾಸಿಯ ಸುತ್ತಮುತ್ತ ಪೈನಾಪಲ್ ಬೆಳೆಯುತ್ತಾರೆ. ಅದನ್ನು ಸಂಸ್ಕರಿಸುವ ಕಾರ್ಖಾನೆಗಳೂ ಇವೆ. ಪೈನಾಪಲ್ ಹೇಗೆ ಬೆಳೆಯುತ್ತಾರೆ ಎಂದೇ ಗೊತ್ತಿರದಿದ್ದ ನಮಗೆ ಪೈನಾಪಲ್ ತೋಟ ನೋಡಿದ್ದು ಖುಷಿಕೊಟ್ಟ ಸಂಗತಿ. ಪೈನಾಪಲ್ ಹೋಳುಗಳು, ಜ್ಯೂಸು ಇತ್ಯಾದಿಗಳನ್ನು ಸಿದ್ಧಪಡಿಸುವ ಕಾರ್ಖಾನೆಗೂ ಹೋಗಿಬಂದೆವು.
ಗುಡ್ನಾಪುರದ ಕೆರೆ ನಮ್ಮ ಮುಂದಿನ ಗುರಿ. ಇಲ್ಲಿ ಸೂರ್ಯಾಸ್ತ ಬಹಳ ಚೆನ್ನಾಗಿ ಕಾಣುತ್ತಂತೆ; ನಮಗೆ ಅದನ್ನು ನೋಡುವ ಅವಕಾಶ ಸಿಗಲಿಲ್ಲ. ಅಲ್ಲೇ ಸಮೀಪದಲ್ಲಿದ್ದ ಐತಿಹಾಸಿಕ ರಾಣಿಮಹಲ್ಗೂ ಹೋಗಿದ್ವಿ; ಆದರೆ ಅದರ ಮೇಲ್ವಿಚಾರಕ ಗೇಟಿಗೆ ಬೀಗಹಾಕಿಕೊಂಡು ಬೀಡಿಸೇದಲು ಹೋಗಿದ್ದ ಕಾರಣ ಹೋದ ದಾರಿಗೆ ಸುಂಕವಿಲ್ಲ ಅಂತ ವಾಪಸ್ ಬಂದದ್ದಾಯಿತು.
ಮಧ್ಯಾಹ್ನದ ಊಟ ಇನ್ನೊಂದು ವಿಶೇಷ. ಖಾನಾವಳಿಯ ಆತ್ಮೀಯ ಉಪಚಾರದಲ್ಲಿ ಎಲ್ಲರೂ ಎರಡೆರಡು ರೊಟ್ಟಿ ಜಾಸ್ತಿಯೇ ತಿಂದ್ವಿ!
ಸಂಜೆ ನಮ್ಮ ಪ್ರಯಾಣ ಸಾಗಿದ್ದು ಗುಡವಿ ಪಕ್ಷಿಧಾಮದ ಕಡೆ. ಇಲ್ಲಿನ ನಿರ್ವಹಣೆಗೆ ಅರಣ್ಯ ಇಲಾಖೆ ಸಾಕಷ್ಟು ಮುತುವರ್ಜಿ ವಹಿಸಿದಂತೆ ಕಾಣುತ್ತದೆ. ಬಹುಶಃ ಇದು ವಲಸೆ ಋತುವಿನ ಅಂತ್ಯವಿರಬೇಕು; ಜಾಸ್ತಿ ಹಕ್ಕಿಗಳ ದರ್ಶನವಾಗಲಿಲ್ಲ. ರಾತ್ರಿ ಅಲ್ಲಿಂದ ಬಂದಮೇಲೆ ಬನವಾಸಿ ಮಳೆಯ ಅನುಭವವೂ ಆಯ್ತು.
ಮರುದಿನ ಬೆಳಗ್ಗೆ ನಮ್ಮ ಟೂರಿಸ್ಟ್ ಹೋಮ್ ಸಮೀಪವೇ ಇದ್ದ ಪಂಪವನದತ್ತ ಹೊರಟೆವು. ಮುಂಜಾವಿನ ಮಂಜಿನಲ್ಲಿ ವಾಕಿಂಗು ಸಖತ್ತಾಗಿತ್ತು. ಇತರ ಹಕ್ಕಿಗಳ ಕಲರವದ ನಡುವೆ ಅಲ್ಲೆಲ್ಲಿಂದಲೋ ನವಿಲಿನ ಕೂಗೂ ಕೇಳಿಬಂತು.
ಪಂಪವನದಿಂದ ಮರಳಿ ಯಾಣ-ಸಹಸ್ರಲಿಂಗ ಮಾರ್ಗವಾಗಿ ಬೆಂಗಳೂರಿನತ್ತ ಹೊರಟಾಗ ನನ್ನ ಮನವೂ ಬನವಾಸಿ ದೇಶವನ್ನೇ ನೆನೆಯುತ್ತಿತ್ತು!
ವನವಾಸಿಕ ಟೂರಿಸ್ಟ್ ಹೋಮ್ನದ್ದು ಸರಳ ಸುಂದರ ವಿನ್ಯಾಸ. ಸಿಬ್ಬಂದಿ ಸ್ನೇಹಪರರು. ಊಟ ತಿಂಡಿ ಅಲ್ಲಿಗೇ ತರಿಸಿಕೊಡುವ ವ್ಯವಸ್ಥೆ ಇದೆ. ಬನವಾಸಿ ಚಿತ್ರಗಳ ಪೋಸ್ಟ್ಕಾರ್ಡುಗಳೂ ಲಭ್ಯ. ಹೆಚ್ಚಿನ ಮಾಹಿತಿಗಾಗಿ ಈ ತಾಣಕ್ಕೆ ಭೇಟಿಕೊಡಿ.