ಹೆಸರಾಂತ ವಿಜ್ಞಾನ ಲೇಖಕ, ಭೂವಿಜ್ಞಾನಿ ಶ್ರೀ ಟಿ. ಆರ್. ಅನಂತರಾಮುರವರು ತಮ್ಮ 'ರಾಜರ ಲೋಹ ಲೋಹಗಳ ರಾಜ - ಚಿನ್ನ' ಕೃತಿಯಲ್ಲಿ ಬರೆದಿರುವ ಕೆಲ ಸಾಲುಗಳು ಹೀಗಿವೆ: "ಚಿನ್ನದ ವಿಶಿಷ್ಟ ಭೌತ ಗುಣಕ್ಕೆ ಸಾಟಿಯೇ ಇಲ್ಲ. ಒಂದು ಗ್ರಾಮ್ ಚಿನ್ನದಿಂದ ಎರಡೂವರೆ ಕಿ.ಮೀ. ದೂರ ತಂತಿ ಎಳೆಯಬಹುದು. ಒಂದು ಟನ್ನು [ಸಾವಿರ ಕೆ.ಜಿ.] ಚಿನ್ನದಿಂದ ತಂತಿ ಎಳೆದರೆ ಚಂದ್ರನನ್ನು ತಲುಪಿ ಅದು ಮರಳಿ ಭೂಮಿಗೆ ಬರಬಲ್ಲದು. ಒಂದು ಸೆಂ.ಮೀ. ಮಂದದ ಚಿನ್ನದ ತಗಡಿನಿಂದ ಒಂದು ಲಕ್ಷ ರೇಕುಗಳನ್ನು ಬಿಡಿಸಬಹುದು."
ತಂತ್ರಜ್ಞಾನ ಕ್ಷೇತ್ರದಲ್ಲಿ ಚಿನ್ನಕ್ಕೆ ಮಾನ್ಯತೆ ದೊರಕಿಸಿಕೊಡುವಲ್ಲಿ ಅದರ ಈ ವಿಶಿಷ್ಟ ಭೌತ ಗುಣದ ಪಾತ್ರ ದೊಡ್ಡದು.
ಇಷ್ಟಕ್ಕೂ ಚಿನ್ನಕ್ಕೂ ತಂತ್ರಜ್ಞಾನಕ್ಕೂ ಇದೆಂಥ ಸಂಬಂಧ? ಈ ಕುರಿತು ನನ್ನ ಲೇಖನ 'e-ಲೋಕದಲ್ಲಿ ಹಳದಿ ಲೋಹ' ತರಂಗ ಪತ್ರಿಕೆಯ ೨೩ ಮೇ ೨೦೧೩ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಓದಿ. ನಿಮ್ಮ ಅನಿಸಿಕೆ-ಅಭಿಪ್ರಾಯಗಳಿಗೆ ಸ್ವಾಗತ.
ತಂತ್ರಜ್ಞಾನ ಕ್ಷೇತ್ರದಲ್ಲಿ ಚಿನ್ನಕ್ಕೆ ಮಾನ್ಯತೆ ದೊರಕಿಸಿಕೊಡುವಲ್ಲಿ ಅದರ ಈ ವಿಶಿಷ್ಟ ಭೌತ ಗುಣದ ಪಾತ್ರ ದೊಡ್ಡದು.
ಇಷ್ಟಕ್ಕೂ ಚಿನ್ನಕ್ಕೂ ತಂತ್ರಜ್ಞಾನಕ್ಕೂ ಇದೆಂಥ ಸಂಬಂಧ? ಈ ಕುರಿತು ನನ್ನ ಲೇಖನ 'e-ಲೋಕದಲ್ಲಿ ಹಳದಿ ಲೋಹ' ತರಂಗ ಪತ್ರಿಕೆಯ ೨೩ ಮೇ ೨೦೧೩ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಓದಿ. ನಿಮ್ಮ ಅನಿಸಿಕೆ-ಅಭಿಪ್ರಾಯಗಳಿಗೆ ಸ್ವಾಗತ.
ನನ್ನ ಪುಸ್ತಕ 'ಫ್ಲಾಪಿಯಿಂದ ಫೇಸ್ಬುಕ್ವರೆಗೆ' ಕುರಿತು ಮೇ ೩, ೨೦೧೩ರ 'ಥಟ್ ಅಂತ ಹೇಳಿ!?' ಕಾರ್ಯಕ್ರಮದಲ್ಲಿ ಡಾ. ನಾ. ಸೋಮೇಶ್ವರ ಅವರು ಮಾಡಿಕೊಟ್ಟ ಪರಿಚಯ ಇಲ್ಲಿದೆ. ಡಾ. ನಾ. ಸೋಮೇಶ್ವರ ಅವರಿಗೆ, ಹಾಗೂ ದೂರದರ್ಶನದ ಚಂದನ ವಾಹಿನಿಗೆ ಹೃತ್ಪೂರ್ವಕ ಕೃತಜ್ಞತೆಗಳು.
ಈ ಪುಸ್ತಕವನ್ನು ಮೈಸೂರಿನ ಭಾರತೀ ಪ್ರಕಾಶನ ಪ್ರಕಟಿಸಿದೆ. ಸಪ್ನಾ ಆನ್ಲೈನ್ ಹಾಗೂ ಆಕೃತಿ ಪುಸ್ತಕದ ಅಂತರಜಾಲ ಮಳಿಗೆಯಲ್ಲಿ ಈ ಪುಸ್ತಕ ಲಭ್ಯ.