ಶಾಲೆಯ ಪಾಠ ಹೇಳಿಕೊಡುವುದಷ್ಟೇ ಶಿಕ್ಷಕರ ಕೆಲಸ ಆಗಿದ್ದರೆ ಬಹುಶಃ ನಾವು ಅವರನ್ನು ಇಷ್ಟೊಂದು ನೆನಪಿಸಿಕೊಳ್ಳುತ್ತಿರಲಿಲ್ಲವೇನೋ.
ನನ್ನ ಬಾಲ್ಯದ ದಿನಗಳಲ್ಲಿ ನಾವಿದ್ದದ್ದು ನಾಗರಹೊಳೆ ಕಾಡಂಚಿನ ಪುಟ್ಟ ಊರೊಂದರಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಒದಗಿಬಂದದ್ದು ಆ ಊರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಇದ್ದ ಅರೆಬರೆ ಸೌಲಭ್ಯಗಳನ್ನೇ ಬಳಸಿಕೊಂಡು ಆಸಕ್ತಿಯಿಂದ ಪಾಠಹೇಳುತ್ತಿದ್ದ ಅಲ್ಲಿನ ಶಿಕ್ಷಕವೃಂದವನ್ನು ಇಂದಿಗೂ ನೆನಪಿಸಿಕೊಳ್ಳಬೇಕು. ಬ್ಯಾಂಕು - ಪೋಸ್ಟ್ ಆಫೀಸುಗಳನ್ನೆಲ್ಲ ಪರಿಚಯಿಸುವ ಮೂಲಕ ಹೊರಗಿನ ಪ್ರಪಂಚದ ವ್ಯವಹಾರಜ್ಞಾನವನ್ನೂ ಬೆಳೆಸಿದ್ದು ಈ ಶಾಲೆ.
ಕನ್ನಡ ಮಾಧ್ಯಮದಲ್ಲಿ ಓದಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂಗೆ ಪಕ್ಷಾಂತರವಾಗುವ ವಿದ್ಯಾರ್ಥಿಗಳನ್ನು ಕೀಳರಿಮೆ ಬಹಳ ಸುಲಭವಾಗಿ ಕಾಡಬಲ್ಲದು. "ಅಯ್ಯೋ ಪಾಪ, ಇಂಗ್ಲಿಷ್ ಬರುವುದಿಲ್ಲ" ಎನ್ನುವ ಅನುಕಂಪ ಜಾಸ್ತಿಯಾದರೆ ಅದೂ ಕಷ್ಟವೇ - ಈ ಅನುಕಂಪದ ಭಾರ ಆತ್ಮವಿಶ್ವಾಸವನ್ನೇ ಉಡುಗಿಸಿಬಿಡುತ್ತದೆ.
ನನ್ನ ಬಾಲ್ಯದ ದಿನಗಳಲ್ಲಿ ನಾವಿದ್ದದ್ದು ನಾಗರಹೊಳೆ ಕಾಡಂಚಿನ ಪುಟ್ಟ ಊರೊಂದರಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಒದಗಿಬಂದದ್ದು ಆ ಊರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಇದ್ದ ಅರೆಬರೆ ಸೌಲಭ್ಯಗಳನ್ನೇ ಬಳಸಿಕೊಂಡು ಆಸಕ್ತಿಯಿಂದ ಪಾಠಹೇಳುತ್ತಿದ್ದ ಅಲ್ಲಿನ ಶಿಕ್ಷಕವೃಂದವನ್ನು ಇಂದಿಗೂ ನೆನಪಿಸಿಕೊಳ್ಳಬೇಕು. ಬ್ಯಾಂಕು - ಪೋಸ್ಟ್ ಆಫೀಸುಗಳನ್ನೆಲ್ಲ ಪರಿಚಯಿಸುವ ಮೂಲಕ ಹೊರಗಿನ ಪ್ರಪಂಚದ ವ್ಯವಹಾರಜ್ಞಾನವನ್ನೂ ಬೆಳೆಸಿದ್ದು ಈ ಶಾಲೆ.
ಕನ್ನಡ ಮಾಧ್ಯಮದಲ್ಲಿ ಓದಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂಗೆ ಪಕ್ಷಾಂತರವಾಗುವ ವಿದ್ಯಾರ್ಥಿಗಳನ್ನು ಕೀಳರಿಮೆ ಬಹಳ ಸುಲಭವಾಗಿ ಕಾಡಬಲ್ಲದು. "ಅಯ್ಯೋ ಪಾಪ, ಇಂಗ್ಲಿಷ್ ಬರುವುದಿಲ್ಲ" ಎನ್ನುವ ಅನುಕಂಪ ಜಾಸ್ತಿಯಾದರೆ ಅದೂ ಕಷ್ಟವೇ - ಈ ಅನುಕಂಪದ ಭಾರ ಆತ್ಮವಿಶ್ವಾಸವನ್ನೇ ಉಡುಗಿಸಿಬಿಡುತ್ತದೆ.