ಕನ್ನಡ ವ್ಯಾಕರಣ ಪ್ರವೇಶ - ಹೊಸ ಆವೃತ್ತಿ ಬರುತ್ತಿದೆ!
8:04 PMನನ್ನ ತಂದೆ ಶ್ರೀ ಟಿ ಎಸ್ ಗೋಪಾಲ್ ಅವರ 'ಕನ್ನಡ ವ್ಯಾಕರಣ ಪ್ರವೇಶ' ಇದೀಗ ಐದನೆಯ ಮುದ್ರಣ ಕಾಣುತ್ತಿದೆ. ಮೈಸೂರಿನ ಭಾರತೀ ಪ್ರಕಾಶನ ಪ್ರಕಟಿಸುತ್ತಿರುವ ಈ ಪುಸ್ತಕ ಸದ್ಯದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಪುಸ್ತಕದ ಬಗ್ಗೆ ಹಿರಿಯ ವಿದ್ವಾಂಸ ಡಾ| ಎನ್ ಕೆ ರಾಮಶೇಷನ್ ಅವರು ವ್ಯಕ್ತಪಡಿಸಿರುವ ಅನಿಸಿಕೆಗಳು ಇಲ್ಲಿವೆ.
ಟಿ ಎಸ್ ಗೋಪಾಲರ 'ಕನ್ನಡ ವ್ಯಾಕರಣ ಪ್ರವೇಶ' ಪುಸ್ತಕವು ವಿದ್ಯಾರ್ಥಿ-ಅಧ್ಯಾಪಕ ಇಬ್ಬರಿಗೂ ನೆರವಾಗುತ್ತದೆ, ಓದಿಸಿಕೊಂಡು ಹೋಗುತ್ತದೆ. ಶಾಸ್ತ್ರವನ್ನು ಸುಲಭವಾಗಿ, ತಿಳಿಯಾಗಿ ನಿರೂಪಿಸಿ ಮನಮುಟ್ಟಿಸುವ ಕಲೆ ಗೋಪಾಲ್ ಅವರಿಗೆ ಹೃದ್ಗತವಾಗಿದೆ.
ಅಕ್ಷರಗಳಿಂದ ಪತ್ರಲೇಖನದ ತನಕ, ಗಾದೆಮಾತು-ಪ್ರಬಂಧ, ತತ್ಸಮ-ತದ್ಭವಗಳು, ನಾನಾರ್ಥ-ಸಮಾನಾರ್ಥ-ವಿರುದ್ಧಾರ್ಥ ಪದಗಳು, ನುಡಿಗಟ್ಟು - ಈ ಎಲ್ಲ ವಿವರಗಳನ್ನೂ ಎಳೆಎಳೆಯಾಗಿ ಹಂತಹಂತವಾಗಿ ನಿರೂಪಿಸಿರುವ ಈ ಪುಸ್ತಕವು ವಿದ್ಯಾರ್ಥಿ-ಅಧ್ಯಾಪಕರಿಗೆ ಕೇವಲ ಕಲಿಕೆಗಷ್ಟೇ ಅಲ್ಲ , ಒಂದು ಆಕರ-ಮಾದರಿಯಾಗಿ ಬಹುಕಾಲ ಉಳಿಯುವ ಕೃತಿಯಾಗಿದೆ.
ಪೂಜ್ಯ ಡಿಎಲ್ಎನ್ ಅವರ 'ಶಬ್ದವಿಹಾರ', ತೀನಂಶ್ರೀ ಅವರ 'ಕನ್ನಡ ಮಧ್ಯಮ ವ್ಯಾಕರಣ' ಇವೆಲ್ಲದರ ಗುಣ, ಆಂತರಿಕ ಸ್ವಾರಸ್ಯ 'ಕನ್ನಡ ವ್ಯಾಕರಣ ಪ್ರವೇಶ'ದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಗೋಪಾಲರಿಂದ ಇಂಥ ಉಪಯುಕ್ತ ಆಕರ ಗ್ರಂಥಗಳು ಹೀಗೆಯೇ ಮೂಡಿಬರಲೆಂದು ಹಾರೈಸುತ್ತೇನೆ.
ಇದೇ ಪುಸ್ತಕದ ಬಗ್ಗೆ ಬೇದ್ರೆ ಮಂಜುನಾಥರೂ ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ.
1 Responses