ಮಾರ್ಚ್ ೨೨, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ. ಈ ಲೇಖನದ ಪಠ್ಯರೂಪಕ್ಕಾಗಿ ಇ-ಜ್ಞಾನ ನೋಡಿ.
ಮೊದಲ ಸಾಲಿನಲ್ಲಿ ಮುದ್ರಿತವಾಗಿರುವ 'ಕಿರಣ ಸೋರಿಕೆ'ಯನ್ನು ವಿಕಿರಣ ಸೋರಿಕೆ ಎಂದು ಓದಿಕೊಳ್ಳಿ. ಹಾಗೆಯೇ ಅಂತರ್ಜಾಲವಲ್ಲ, ಅದು ಅಂತರಜಾಲ.
ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಂಚೆಚೀಟಿ ಸಂಗ್ರಾಹಕರಿಗೆಂದೇ ಅಪರೂಪದ ಅಂಚೆಚೀಟಿಗಳನ್ನು ಆಗಿಂದಾಗ್ಗೆ ಹೊರತರಲಾಗುತ್ತದೆ. ವಿಭಿನ್ನ ಚಿತ್ರಗಳು, ಬೇರೆಬೇರೆ ಮಾಧ್ಯಮಗಳು, ವಿಶೇಷ ಲಕ್ಷಣಗಳನ್ನು ಹೊಂದಿರುವ ಈ ಅಂಚೆಚೀಟಿಗಳಲ್ಲಿ ಅಪಾರ ವೈವಿಧ್ಯವಿರುತ್ತದೆ. ಭಾರತ ಹೊರತಂದ ಗುಲಾಬಿ-ಮಲ್ಲಿಗೆ-ಶ್ರೀಗಂಧಗಳ ಸುವಾಸನೆಯುಳ್ಳ ಅಂಚೆಚೀಟಿಗಳು ಹಾಗೂ ಭೂತಾನ್ ದೇಶ ಹೊರಡಿಸಿದ ಸಿ.ಡಿ. ಅಂಚೆಚೀಟಿ - ಇವು ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೆಸರುಮಾಡಿದ್ದವು.
ಇದೀಗ ಇಂತಹ ಅಂಚೆಚೀಟಿಗಳ ಸಾಲಿಗೆ ಭಾರತದ ಖಾದಿ ಸ್ಟಾಂಪು ಕೂಡ ಸೇರಿಕೊಂಡಿದೆ. ಇತ್ತೀಚೆಗಷ್ಟೆ ನನ್ನ ಸಂಗ್ರಹ ಸೇರಿದ ಈ ಅಂಚೆಚೀಟಿಯ ಬಗೆಗೆ ನಾನು ಬರೆದ ಪುಟ್ಟದೊಂದು ಬರೆಹ ಮಾರ್ಚ್ ೨೪, ೨೦೧೧ರ ಸುಧಾದಲ್ಲಿ ಪ್ರಕಟವಾಗಿದೆ.
ಇದೀಗ ಇಂತಹ ಅಂಚೆಚೀಟಿಗಳ ಸಾಲಿಗೆ ಭಾರತದ ಖಾದಿ ಸ್ಟಾಂಪು ಕೂಡ ಸೇರಿಕೊಂಡಿದೆ. ಇತ್ತೀಚೆಗಷ್ಟೆ ನನ್ನ ಸಂಗ್ರಹ ಸೇರಿದ ಈ ಅಂಚೆಚೀಟಿಯ ಬಗೆಗೆ ನಾನು ಬರೆದ ಪುಟ್ಟದೊಂದು ಬರೆಹ ಮಾರ್ಚ್ ೨೪, ೨೦೧೧ರ ಸುಧಾದಲ್ಲಿ ಪ್ರಕಟವಾಗಿದೆ.
ಅಂತರಜಾಲದ ಲೋಕದಲ್ಲಿ ನನ್ನದೂ ಒಂದು ತಾಣ ಇರಬೇಕು ಎನ್ನುವುದು ನನ್ನ ಬಹುದಿನಗಳ ಆಸೆ. ಫ್ರೀಸರ್ವರ್ಸ್ನಲ್ಲಿ, ಟ್ರೈಪಾಡ್ನಲ್ಲಿ - ಹೀಗೆ ಹತ್ತಾರು ಕಡೆ ವೆಬ್ ಪುಟಗಳನ್ನು ರೂಪಿಸುವ ಹುಚ್ಚು ಕಾಲೇಜು ದಿನಗಳಿಂದಲೂ ಇತ್ತು. ಮೊದಮೊದಲು ಬ್ಲಾಗಿಂಗ್ನ ಗಾಳಿ ಬೀಸಿದಾಗ ೨೦೦೫ರಲ್ಲೇ ಒಂದು ಬ್ಲಾಗನ್ನೂ ಶುರುಮಾಡಿದ್ದೆ; ಆದರೆ ಅದು ಜಾಸ್ತಿ ದಿನ ಬದುಕಿರಲಿಲ್ಲ ಅಷ್ಟೆ!
ನಂತರ, ೨೦೦೬ನೇ ಇಸವಿಯಲ್ಲಿ ಮನೆಗೆ ಬ್ರಾಡ್ಬ್ಯಾಂಡ್ ಸೌಲಭ್ಯ ಬಂದ ಮೇಲೆ, ನನ್ನ ಲೇಖನಗಳನ್ನೆಲ್ಲ ಅಂತರಜಾಲದಲ್ಲಿ ಒಂದು ಕಡೆ ಸಂಗ್ರಹಿಸಿಡಬೇಕು ಎನ್ನುವ ಸರಳ ಉದ್ದೇಶದೊಡನೆ ಪ್ರಾರಂಭವಾದದ್ದು ಶ್ರೀನಿಧಿಯ ಪ್ರಪಂಚ. ಮುಂದಿನ ದಿನಗಳಲ್ಲಿ ಲೇಖನಗಳಷ್ಟೇ ಅಲ್ಲದೆ ನಾನು ತೆಗೆದ ಛಾಯಾಚಿತ್ರಗಳನ್ನು, ಅನಿಸಿಕೆ-ಅನುಭವಗಳನ್ನು ಹಂಚಿಕೊಳ್ಳಲೂ ಇದೊಂದು ವೇದಿಕೆಯಾಯಿತು.
ಇವತ್ತಿಗೆ ಈ ಬ್ಲಾಗು ಬ್ಲಾಗಮಂಡಲಕ್ಕೆ ಕಾಲಿಟ್ಟು ಐದು ವರ್ಷ. ಈ ಐದು ವರ್ಷಗಳಲ್ಲಿ ಬ್ಲಾಗ್ ಲೋಕ ನನ್ನ ಪ್ರಪಂಚವನ್ನು ಗಣನೀಯವಾಗಿ ವಿಸ್ತರಿಸಿದೆ, ಅನೇಕರ ಗೆಳೆತನ ಸಂಪಾದಿಸಿಕೊಟ್ಟಿದೆ. ಎರಡು ವರ್ಷಕ್ಕಿಂತ ಕಡಿಮೆ ಸಮಯದಲ್ಲಿ ಶ್ರೀನಿಧಿಯ ಪ್ರಪಂಚದಲ್ಲಿ ಆರು ಸಾವಿರಕ್ಕೂ ಹೆಚ್ಚು ವಿಸಿಟ್ಟುಗಳು, ಹೆಚ್ಚೂಕಡಿಮೆ ಹನ್ನೆರಡು ಸಾವಿರ ಪೇಜ್-ವ್ಯೂಗಳು ದಾಖಲಾಗಿವೆ.
ಶ್ರೀನಿಧಿಯ ಪ್ರಪಂಚವನ್ನು ಮೆಚ್ಚಿಕೊಂಡಿರುವ, ಬೆನ್ನುತಟ್ಟಿ ಬೆಳೆಸಿರುವ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.
ನಂತರ, ೨೦೦೬ನೇ ಇಸವಿಯಲ್ಲಿ ಮನೆಗೆ ಬ್ರಾಡ್ಬ್ಯಾಂಡ್ ಸೌಲಭ್ಯ ಬಂದ ಮೇಲೆ, ನನ್ನ ಲೇಖನಗಳನ್ನೆಲ್ಲ ಅಂತರಜಾಲದಲ್ಲಿ ಒಂದು ಕಡೆ ಸಂಗ್ರಹಿಸಿಡಬೇಕು ಎನ್ನುವ ಸರಳ ಉದ್ದೇಶದೊಡನೆ ಪ್ರಾರಂಭವಾದದ್ದು ಶ್ರೀನಿಧಿಯ ಪ್ರಪಂಚ. ಮುಂದಿನ ದಿನಗಳಲ್ಲಿ ಲೇಖನಗಳಷ್ಟೇ ಅಲ್ಲದೆ ನಾನು ತೆಗೆದ ಛಾಯಾಚಿತ್ರಗಳನ್ನು, ಅನಿಸಿಕೆ-ಅನುಭವಗಳನ್ನು ಹಂಚಿಕೊಳ್ಳಲೂ ಇದೊಂದು ವೇದಿಕೆಯಾಯಿತು.
ಇವತ್ತಿಗೆ ಈ ಬ್ಲಾಗು ಬ್ಲಾಗಮಂಡಲಕ್ಕೆ ಕಾಲಿಟ್ಟು ಐದು ವರ್ಷ. ಈ ಐದು ವರ್ಷಗಳಲ್ಲಿ ಬ್ಲಾಗ್ ಲೋಕ ನನ್ನ ಪ್ರಪಂಚವನ್ನು ಗಣನೀಯವಾಗಿ ವಿಸ್ತರಿಸಿದೆ, ಅನೇಕರ ಗೆಳೆತನ ಸಂಪಾದಿಸಿಕೊಟ್ಟಿದೆ. ಎರಡು ವರ್ಷಕ್ಕಿಂತ ಕಡಿಮೆ ಸಮಯದಲ್ಲಿ ಶ್ರೀನಿಧಿಯ ಪ್ರಪಂಚದಲ್ಲಿ ಆರು ಸಾವಿರಕ್ಕೂ ಹೆಚ್ಚು ವಿಸಿಟ್ಟುಗಳು, ಹೆಚ್ಚೂಕಡಿಮೆ ಹನ್ನೆರಡು ಸಾವಿರ ಪೇಜ್-ವ್ಯೂಗಳು ದಾಖಲಾಗಿವೆ.
ಶ್ರೀನಿಧಿಯ ಪ್ರಪಂಚವನ್ನು ಮೆಚ್ಚಿಕೊಂಡಿರುವ, ಬೆನ್ನುತಟ್ಟಿ ಬೆಳೆಸಿರುವ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.
ಮಾರ್ಚ್ ೮, ೨೦೧೧ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ. ಈ ಲೇಖನದ ಪಠ್ಯರೂಪಕ್ಕಾಗಿ ಇ-ಜ್ಞಾನ ನೋಡಿ.
ಮಾರ್ಚ್ ೧, ೨೦೧೧ರಂದು ಪ್ರಕಟವಾದ ಈ ಲೇಖನದೊಡನೆ ಉದಯವಾಣಿಯ ನನ್ನ ಅಂಕಣ 'ವಿಜ್ಞಾಪನೆ' ಇಪ್ಪತ್ತು ವಾರ ಪೂರೈಸಿದೆ. ಇದೇ ಲೇಖನದ ಪಠ್ಯರೂಪ ಇ-ಜ್ಞಾನದಲ್ಲಿದೆ.