ಈ ತಾಣದಲ್ಲಿ ಬ್ಲಾಗಿಸಲು ಶುರುಮಾಡಿ ಇವತ್ತಿಗೆ ಆರು ವರ್ಷ. ಕಳೆದ ಆರು ವರ್ಷಗಳಲ್ಲಿ ಈ ಹವ್ಯಾಸ ಬೇಕಾದಷ್ಟನ್ನು ದೊರಕಿಸಿಕೊಟ್ಟಿದೆ. ಹೊಸ ಮಿತ್ರರ ಪರಿಚಯ, ಹೊಸ ಅವಕಾಶಗಳು, ನನ್ನ ಬರೆವಣಿಗೆಗೆ ಪ್ರತಿಕ್ರಿಯೆ, ಚಿತ್ರಗಳಿಗೆ ಮೆಚ್ಚುಗೆ - ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಆಕೃತಿ ಪುಸ್ತಕದ ಗುರುಪ್ರಸಾದರೊಡನೆ ಸೇರಿ ಕಳೆದ ವರ್ಷ ಹೊರತಂದ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಪುಸ್ತಕಕ್ಕೆ ಖುಷಿಕೊಡುವ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ. ಮೊತ್ತಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ, ಮಾತನಾಡಿದ ಅನುಭವ ದೊರೆತದ್ದೂ ಇದೇ ವರ್ಷದಲ್ಲಿ.
ಒಟ್ಟಿನಲ್ಲಿ ಶ್ರೀನಿಧಿಯ ಪ್ರಪಂಚದ ಈ ಆರು ವರ್ಷಗಳು ಮರೆಯಲಾಗದ ನೆನಪುಗಳನ್ನು ಕೊಟ್ಟಿವೆ, ಮರೆಯಬಾರದ ಪಾಠಗಳನ್ನೂ ಕಲಿಸಿವೆ.
ಅವೆಲ್ಲವುದಕ್ಕಾಗಿ ನಾನು ಕೃತಜ್ಞ.
ವಿಶ್ವಾಸದಿಂದ,
ಶ್ರೀನಿಧಿ
ಆಕೃತಿ ಪುಸ್ತಕದ ಗುರುಪ್ರಸಾದರೊಡನೆ ಸೇರಿ ಕಳೆದ ವರ್ಷ ಹೊರತಂದ 'ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು' ಪುಸ್ತಕಕ್ಕೆ ಖುಷಿಕೊಡುವ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ. ಮೊತ್ತಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ, ಮಾತನಾಡಿದ ಅನುಭವ ದೊರೆತದ್ದೂ ಇದೇ ವರ್ಷದಲ್ಲಿ.
ಒಟ್ಟಿನಲ್ಲಿ ಶ್ರೀನಿಧಿಯ ಪ್ರಪಂಚದ ಈ ಆರು ವರ್ಷಗಳು ಮರೆಯಲಾಗದ ನೆನಪುಗಳನ್ನು ಕೊಟ್ಟಿವೆ, ಮರೆಯಬಾರದ ಪಾಠಗಳನ್ನೂ ಕಲಿಸಿವೆ.
ಅವೆಲ್ಲವುದಕ್ಕಾಗಿ ನಾನು ಕೃತಜ್ಞ.
ವಿಶ್ವಾಸದಿಂದ,
ಶ್ರೀನಿಧಿ
ಪ್ರಖ್ಯಾತ ವನ್ಯಪ್ರೇಮಿ ಶ್ರೀ ಕೆ. ಎಂ. ಚಿಣ್ಣಪ್ಪನವರ ಅನುಭವಕಥನ 'ಕಾಡಿನೊಳಗೊಂದು ಜೀವ'ದ ಹೊಸ ಆವೃತ್ತಿ ನವಕರ್ನಾಟಕ ಪ್ರಕಾಶನದಿಂದ ಈಗಷ್ಟೆ ಪ್ರಕಟವಾಗಿದೆ. ನನ್ನ ತಂದೆ ಶ್ರೀ ಟಿ. ಎಸ್. ಗೋಪಾಲ್ ಅವರ ನಿರೂಪಣೆಯಲ್ಲಿ ಮೂಡಿಬಂದಿರುವ ಈ ಕೃತಿಯ ಮೊದಲ ಸಮಗ್ರ ಪರಿಷ್ಕೃತ ಆವೃತ್ತಿ ೨೦೧೦ರಲ್ಲಿ ಹೊರಬಂದಿತ್ತು.
ಕಾಡಿನೊಳಗೊಂದು ಜೀವ
ಕೆ. ಎಂ. ಚಿಣ್ಣಪ್ಪ ಹಾಗೂ ಟಿ. ಎಸ್. ಗೋಪಾಲ್
ಸಮಗ್ರ ಆವೃತ್ತಿಯ ಎರಡನೇ ಮುದ್ರಣ: ೨೦೧೧
೨೫೬ ಪುಟಗಳು, ಬೆಲೆ ರೂ. ೧೭೦/-
ನವಕರ್ನಾಟಕ ಪ್ರಕಾಶನ, ಬೆಂಗಳೂರು
"ಕಾಡಲ್ಲಿ ಕಾರ್ ಓಡ್ಸೋದೇ ಒಂದು ಮಜಾ ಗೊತ್ತಾ?" ಅಂದ ಅವನು.
ಸರಿ ಅದೇನು ಮಜಾನೋ ನೋಡೇಬಿಡೋಣ ಅಂತ ಒಂದಿಬ್ಬರು ಗೆಳೆಯರೂ ಅವನ ಜೊತೆಗೇ ಹೊರಟರು. ಮ್ಯೂಸಿಕ್ ಸಿಸ್ಟಮ್ಮಿನ ಸಂಗೀತದ ಅಬ್ಬರವನ್ನೂ ಮೀರಿಸುವ ಸ್ಪೀಡಲ್ಲಿ ಕಾಡಿನತ್ತ ಓಡಿತು ಕಾರು.
* * *
ಬೇಸಿಗೆ ಶುರುವಾಗುತ್ತಿದ್ದ ಕಾಲ, ಎಲ್ಲೆಲ್ಲಿ ನೋಡಿದರೂ ಒಣಗಿದ ಎಲೆಗಳ ರಾಶಿ ಕಾಡಲ್ಲಿ ಇವರ ಕಾರನ್ನು ಸ್ವಾಗತಿಸಿತು. ವೇಗದ ಮಿತಿ, ಶಬ್ದ ಮಾಡದಂತೆ ನಿರ್ಬಂಧ, ಪ್ಲಾಸ್ಟಿಕ್ಕು ನಿಷೇಧ ಹಾಳೂಮೂಳುಗಳ ಕುರಿತು ಪ್ರವೇಶದ್ವಾರದ ಬಳಿಯಿದ್ದ ಎಚ್ಚರಿಕೆಯ ಫಲಕಗಳು ಕಾರಿನಲ್ಲಿದ್ದವರಿಗೆ ಕಾಣಲಿಲ್ಲ; ಕಾರಿನ ವೇಗ-ಸಂಗೀತದ ಅಬ್ಬರ ಕಡಿಮೆಯೂ ಆಗಲಿಲ್ಲ.
"ಇದೆಂಥಾ ಕಾಡು ಮಗಾ, ಹುಲಿ-ಸಿಂಹ ಇಲ್ದಿದ್ರೆ ಬೇಡ ಒಂದು ಆನೇನೂ ಕಾಣ್ತಾ ಇಲ್ಲ!?" ಎಂದವನಿಗೆ ಅವನ ಕಾರಿನ ಹಾರ್ನು ಕೇಳಿ ಬೆದರಿ ಓಡಿದ ಕಾಡುಕುರಿ ಕಾಣಲಿಲ್ಲ. ಕೊಂಚ ಎತ್ತರದಲ್ಲಿದ್ದ ಗಿಡದ ಸೊಪ್ಪು ತಿನ್ನಲು ಎರಡು ಕಾಲಿನಲ್ಲಿ ನಿಂತು ಸರ್ಕಸ್ ಮಾಡುತ್ತಿದ್ದ ಜಿಂಕೆ, ಮರದ ಮೇಲೆ ಕೂತಿದ್ದ ಮಂಗಟ್ಟೆ ಪಕ್ಷಿ, ಪಕ್ಕದ ರೆಂಬೆಯ ಮೇಲೆ ಟೆಡ್ಡಿಬೇರ್ನಂತೆ ಕುಳಿತಿದ್ದ ಕೆಂದಳಿಲು, ಅದೇ ಮರದ ಅಡಿಯಲ್ಲಿದ್ದ ನವಿಲು ಜೋಡಿ ಯಾವುದನ್ನೂ ಗಮನಿಸದ ಕಾರು ಓಡುತ್ತಲೇ ಇತ್ತು.
ಕೊಂಚ ಮುಂದೆ ಹೋಗುತ್ತಿದ್ದಂತೆ ಹಿಂದಿನ ಸೀಟಿನಲ್ಲಿದ್ದವನಿಗೆ ಅದೇನೋ ಜೋಶ್ ಬಂತು. "ಮಗಾ ಸ್ವಲ್ಪ ನಿಲ್ಸು, ಈ ಲೊಕೇಶನ್ ನೋಡ್ತಾ ಇದ್ರೆ ಎಣ್ಣೆ ಹೊಡೀಬೇಕು ಅನ್ನಿಸ್ತಾ ಇದೆ" ಅಂದ. ಕಾರು ನಿಂತಿತು. ಒಂದೆರಡು ಬಾಟಲಿ, ನಾಲ್ಕಾರು ಪ್ಲಾಸ್ಟಿಕ್ ಚೀಲ ಖಾಲಿಯಾದವು. ಖಾಲಿಯಾದ ಮೇಲೆ ಅವಕ್ಕೆ ಕಾರಿನಲ್ಲೇನು ಕೆಲಸ, ಸದ್ದಿಲ್ಲದೆ ಕಾಡುಪಾಲಾದವು.
ಇಷ್ಟು ಹೊತ್ತಿಗೆ ಕಾಡಿನ ಮಜಾ ಅನುಭವಿಸಿ ಮುಗಿಸಿದ್ದವನು ಕಾರನ್ನು ಹಿಂದಕ್ಕೆ ತಿರುಗಿಸಿದ. ಮ್ಯೂಸಿಕ್ ಸಿಸ್ಟಮ್ಮಿನ ಸಂಗೀತದ ಅಬ್ಬರದ ಜೊತೆಗೆ ರೇಸ್ ಮಾಡುತ್ತ ಕಾರು ವಾಪಸ್ ನಾಡಿನತ್ತ ಓಡಿತು. ಇನ್ನೇನು ಮುಗಿಯಲಿದ್ದ ಸಿಗರೇಟನ್ನು ಹಿಡಿದಿದ್ದವ ಅದನ್ನು ಥೇಟ್ ಸಿನಿಮಾ ಹೀರೋ ಸ್ಟೈಲಿನಲ್ಲೇ ಕಾರಿನಿಂದಾಚೆ ಚಿಮ್ಮಿಸಿದ.
* * *
"ಕಾಡ್ಗಿಚ್ಚಿನಿಂದ ಅಪಾರ ಹಾನಿ" ಎಂಬ ಸುದ್ದಿ ಟೀವಿ ಚಾನೆಲ್ಲಿನ ಸ್ಕ್ರಾಲಿನಲ್ಲಿ ಕೊಂಚಹೊತ್ತು ಓಡಾಡಿ ಮರೆಯಾಯಿತು. ಅಕಸ್ಮಾತ್ತಾಗಿ ಅದನ್ನು ನೋಡಿದವನು ತನ್ನ ಗೆಳೆಯನಿಗೆ ಫೋನು ಮಾಡಿ "ಮಗಾ ಕಾಡಲ್ಲಿ ಬೆಂಕಿ ಅಂತೆ, ಬೆಂಕಿ ಮಧ್ಯದಲ್ಲಿ ಕಾರ್ ಓಡ್ಸೋದೂ ಮಜಾನೇ ಇರ್ಬೇಕು ಅಲ್ವಾ?" ಅಂತ ಕೇಳಿದ.
ಹುಲ್ಲಿನ ಜೊತೆಗೆ ಪ್ಲಾಸ್ಟಿಕ್ ಚೀಲವನ್ನೂ ತಿಂದು ಸತ್ತ ಜಿಂಕೆಗೆ ಯಾವ ಪೇಪರಿನಲ್ಲೂ ಶ್ರದ್ಧಾಂಜಲಿ ಪ್ರಕಟವಾಗಲಿಲ್ಲ.
ಸರಿ ಅದೇನು ಮಜಾನೋ ನೋಡೇಬಿಡೋಣ ಅಂತ ಒಂದಿಬ್ಬರು ಗೆಳೆಯರೂ ಅವನ ಜೊತೆಗೇ ಹೊರಟರು. ಮ್ಯೂಸಿಕ್ ಸಿಸ್ಟಮ್ಮಿನ ಸಂಗೀತದ ಅಬ್ಬರವನ್ನೂ ಮೀರಿಸುವ ಸ್ಪೀಡಲ್ಲಿ ಕಾಡಿನತ್ತ ಓಡಿತು ಕಾರು.
* * *
ಬೇಸಿಗೆ ಶುರುವಾಗುತ್ತಿದ್ದ ಕಾಲ, ಎಲ್ಲೆಲ್ಲಿ ನೋಡಿದರೂ ಒಣಗಿದ ಎಲೆಗಳ ರಾಶಿ ಕಾಡಲ್ಲಿ ಇವರ ಕಾರನ್ನು ಸ್ವಾಗತಿಸಿತು. ವೇಗದ ಮಿತಿ, ಶಬ್ದ ಮಾಡದಂತೆ ನಿರ್ಬಂಧ, ಪ್ಲಾಸ್ಟಿಕ್ಕು ನಿಷೇಧ ಹಾಳೂಮೂಳುಗಳ ಕುರಿತು ಪ್ರವೇಶದ್ವಾರದ ಬಳಿಯಿದ್ದ ಎಚ್ಚರಿಕೆಯ ಫಲಕಗಳು ಕಾರಿನಲ್ಲಿದ್ದವರಿಗೆ ಕಾಣಲಿಲ್ಲ; ಕಾರಿನ ವೇಗ-ಸಂಗೀತದ ಅಬ್ಬರ ಕಡಿಮೆಯೂ ಆಗಲಿಲ್ಲ.
"ಇದೆಂಥಾ ಕಾಡು ಮಗಾ, ಹುಲಿ-ಸಿಂಹ ಇಲ್ದಿದ್ರೆ ಬೇಡ ಒಂದು ಆನೇನೂ ಕಾಣ್ತಾ ಇಲ್ಲ!?" ಎಂದವನಿಗೆ ಅವನ ಕಾರಿನ ಹಾರ್ನು ಕೇಳಿ ಬೆದರಿ ಓಡಿದ ಕಾಡುಕುರಿ ಕಾಣಲಿಲ್ಲ. ಕೊಂಚ ಎತ್ತರದಲ್ಲಿದ್ದ ಗಿಡದ ಸೊಪ್ಪು ತಿನ್ನಲು ಎರಡು ಕಾಲಿನಲ್ಲಿ ನಿಂತು ಸರ್ಕಸ್ ಮಾಡುತ್ತಿದ್ದ ಜಿಂಕೆ, ಮರದ ಮೇಲೆ ಕೂತಿದ್ದ ಮಂಗಟ್ಟೆ ಪಕ್ಷಿ, ಪಕ್ಕದ ರೆಂಬೆಯ ಮೇಲೆ ಟೆಡ್ಡಿಬೇರ್ನಂತೆ ಕುಳಿತಿದ್ದ ಕೆಂದಳಿಲು, ಅದೇ ಮರದ ಅಡಿಯಲ್ಲಿದ್ದ ನವಿಲು ಜೋಡಿ ಯಾವುದನ್ನೂ ಗಮನಿಸದ ಕಾರು ಓಡುತ್ತಲೇ ಇತ್ತು.
ಕೊಂಚ ಮುಂದೆ ಹೋಗುತ್ತಿದ್ದಂತೆ ಹಿಂದಿನ ಸೀಟಿನಲ್ಲಿದ್ದವನಿಗೆ ಅದೇನೋ ಜೋಶ್ ಬಂತು. "ಮಗಾ ಸ್ವಲ್ಪ ನಿಲ್ಸು, ಈ ಲೊಕೇಶನ್ ನೋಡ್ತಾ ಇದ್ರೆ ಎಣ್ಣೆ ಹೊಡೀಬೇಕು ಅನ್ನಿಸ್ತಾ ಇದೆ" ಅಂದ. ಕಾರು ನಿಂತಿತು. ಒಂದೆರಡು ಬಾಟಲಿ, ನಾಲ್ಕಾರು ಪ್ಲಾಸ್ಟಿಕ್ ಚೀಲ ಖಾಲಿಯಾದವು. ಖಾಲಿಯಾದ ಮೇಲೆ ಅವಕ್ಕೆ ಕಾರಿನಲ್ಲೇನು ಕೆಲಸ, ಸದ್ದಿಲ್ಲದೆ ಕಾಡುಪಾಲಾದವು.
ಇಷ್ಟು ಹೊತ್ತಿಗೆ ಕಾಡಿನ ಮಜಾ ಅನುಭವಿಸಿ ಮುಗಿಸಿದ್ದವನು ಕಾರನ್ನು ಹಿಂದಕ್ಕೆ ತಿರುಗಿಸಿದ. ಮ್ಯೂಸಿಕ್ ಸಿಸ್ಟಮ್ಮಿನ ಸಂಗೀತದ ಅಬ್ಬರದ ಜೊತೆಗೆ ರೇಸ್ ಮಾಡುತ್ತ ಕಾರು ವಾಪಸ್ ನಾಡಿನತ್ತ ಓಡಿತು. ಇನ್ನೇನು ಮುಗಿಯಲಿದ್ದ ಸಿಗರೇಟನ್ನು ಹಿಡಿದಿದ್ದವ ಅದನ್ನು ಥೇಟ್ ಸಿನಿಮಾ ಹೀರೋ ಸ್ಟೈಲಿನಲ್ಲೇ ಕಾರಿನಿಂದಾಚೆ ಚಿಮ್ಮಿಸಿದ.
* * *
"ಕಾಡ್ಗಿಚ್ಚಿನಿಂದ ಅಪಾರ ಹಾನಿ" ಎಂಬ ಸುದ್ದಿ ಟೀವಿ ಚಾನೆಲ್ಲಿನ ಸ್ಕ್ರಾಲಿನಲ್ಲಿ ಕೊಂಚಹೊತ್ತು ಓಡಾಡಿ ಮರೆಯಾಯಿತು. ಅಕಸ್ಮಾತ್ತಾಗಿ ಅದನ್ನು ನೋಡಿದವನು ತನ್ನ ಗೆಳೆಯನಿಗೆ ಫೋನು ಮಾಡಿ "ಮಗಾ ಕಾಡಲ್ಲಿ ಬೆಂಕಿ ಅಂತೆ, ಬೆಂಕಿ ಮಧ್ಯದಲ್ಲಿ ಕಾರ್ ಓಡ್ಸೋದೂ ಮಜಾನೇ ಇರ್ಬೇಕು ಅಲ್ವಾ?" ಅಂತ ಕೇಳಿದ.
ಹುಲ್ಲಿನ ಜೊತೆಗೆ ಪ್ಲಾಸ್ಟಿಕ್ ಚೀಲವನ್ನೂ ತಿಂದು ಸತ್ತ ಜಿಂಕೆಗೆ ಯಾವ ಪೇಪರಿನಲ್ಲೂ ಶ್ರದ್ಧಾಂಜಲಿ ಪ್ರಕಟವಾಗಲಿಲ್ಲ.
ಈಚೆಗೆ ಕೆಲದಿನಗಳಿಂದ ಎಲ್ಲೆಲ್ಲೂ ಕಾಡಿನ ಬೆಂಕಿಯದೇ ಸುದ್ದಿ. ನಮ್ಮ ದೇಶದಲ್ಲಿ ಕಾಡಿನ ಬೆಂಕಿ ಬಹುತೇಕ ಯಾವಾಗಲೂ ಮಾನವನ ಹಸ್ತಕ್ಷೇಪದಿಂದಲೇ ಪ್ರಾರಂಭವಾಗುತ್ತದೆ. ಮಾನವನ ದುಷ್ಕೃತ್ಯ ಮತ್ತು ಬೇಜವಾಬ್ದಾರಿಯೇ ಕಾಡ್ಗಿಚ್ಚಿಗೆ ನೇರ ಕಾರಣ ಎಂಬ ಬಗ್ಗೆ ಸಾರ್ವತ್ರಿಕ ಅರಿವು ಮೂಡಿಸುವುದು, ಅಳಿದುಳಿದಿರುವ ಅರಣ್ಯಪ್ರದೇಶವನ್ನು ಬೆಂಕಿಯಿಂದ ರಕ್ಷಿಸಲು ನೆರವಾಗುವುದು ನಮ್ಮೆಲ್ಲರ ಕರ್ತವ್ಯ. ಯಾವುದೇ ಸಂದರ್ಭದಲ್ಲಿ ಅರಣ್ಯ ಪ್ರದೇಶಗಳಿಗೆ ಹೋದಾಗ ಜವಾಬ್ದಾರಿಯಿಂದ ವರ್ತಿಸುವುದು ಈ ನಿಟ್ಟಿನಲ್ಲಿ ನಾವು ಮಾಡಬಹುದಾದ ಕೆಲಸಗಳಲ್ಲಿ ಮೊದಲನೆಯದು.